ಇದರಿಂದ ಕೆರಳಿದ ಶಾಸಕ ಅಲ್ಲಿಯೇ ಇದ್ದ ಸಬ್ ಇನ್ಸ್ಪೆಕ್ಟರ್ ಲಕ್ಷ್ಮಯ್ಯ ಅವರನ್ನು ಕರೆದು, ‘ಏಯ್ ನೀನೇನು ಇನ್ಸ್ಪೆಕ್ಟರ್ ಕೆಲಸ ಮಾಡಕ್ಕೆ ಬಂದಿದ್ದಿಯಾ ಇಲ್ಲ ರೌಡಿಸಂ ಮಾಡಕ್ಕೆ ಬಂದಿದ್ದಿಯಾ, ಮಹಿಳೆಯರು, ರೈತರ ಜತೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲವಾ, ನಿನಗೆ ಮಾನ, ಮರ್ಯಾದೆ ಇಲ್ಲವ, ಬುದ್ಧಿ ಇಲ್ಲವ, ನೀನು ಪೊಲೀಸ್ ಇಲಾಖೆಯನ್ನು ರೌಡಿಸಂ ಇಲಾಖೆ ಅನ್ಕೊಂಡಿದ್ದಿಯ, ಅನ್ನ ತಿಂತಿಯಾ ಏನ್ ತಿಂತಿಯಾ.....’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.