ಅನರ್ಹಗೊಳಿಸುವ ಬಗ್ಗೆ ತಮಗೆ ಮೊದಲೇ ಸುಳಿವಿತ್ತು ಎಂದು ಅನರ್ಹಗೊಂಡಿರುವ ಮತ್ತೊಬ್ಬ ಶಾಸಕ ಮುನಿರತ್ನ ಹೇಳಿದ್ದು, ಕಾನೂನು ಪ್ರಕಾರವೇ ಎಲ್ಲವನ್ನೂ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ. ‘ಅನರ್ಹಗೊಳಿಸುವ ಬಗ್ಗೆ ಪಕ್ಷದ ಮುಖಂಡರು ಬೆದರಿಕೆ ಒಡ್ಡಿದ್ದರು. ನಾವೇನೂ ಚಿಕ್ಕ ಮಕ್ಕಳಲ್ಲ. ಯಾರಿಗೂ ತಿಳಿಯದಂತೇನೂ ನಾವು ಹೋಗಿರಲಿಲ್ಲ’ ಎಂದಿದ್ದಾರೆ.