ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮೊಡನೆ ಮಾತನಾಡಿದರು ಎಂದು ಹೇಳಿದ ಜಿ.ಟಿ.ದೇವೇಗೌಡ, ‘ಸರ್ಕಾರ ಗಟ್ಟಿಯಾಗಿದೆ. ನೀವೆಲ್ಲವೂ ಒಗ್ಗಟ್ಟಾಗಿರಿ, ಒಟ್ಟಾಗಿರಿ. ನಮ್ಮ ಮೂವರು ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನೂ ಹಲವರನ್ನು ಸೆಳೆಯಲು ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ಉಳಿಸೋಣ. ನೀವೇನೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಕುಮಾರಸ್ವಾಮಿ ಅವರ ಮಾತುಗಳನ್ನು ಉಲ್ಲೇಖಿಸಿದರು.