‘ಅಣಕು ಮತದಾನದ ವೇಳೆ ಮತಗಟ್ಟೆಗಳಲ್ಲಿ ತಲಾ 50 ಮತಗಳನ್ನು ಚಲಾಯಿಸಲಾಗಿತ್ತು. ಇದನ್ನು ಡಿಲೀಟ್ ಮಾಡುವ ಕರ್ತವ್ಯ ಮತಗಟ್ಟೆ ಸಿಬ್ಬಂದಿಯದು. ಆದರೆ, ಅವರು ಅಳಿಸದೇ ಮತದಾನ ಮುಂದುವರಿಸಿದ್ದಾರೆ. ಇದು ಒತ್ತಡದಲ್ಲಾದ ಮಾನವ ಸಹಜ ತಪ್ಪಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ, ವಿವಿಪ್ಯಾಟ್ಗಳ ಮಾಹಿತಿ ಸಂಗ್ರಹಿಸಿಡಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ವಿವಿಪ್ಯಾಟ್ನಲ್ಲಿನ ಸ್ಲಿಪ್ಗಳನ್ನು ಎಣಿಸಲಾಗುವುದು. ಈ ವಿಷಯವನ್ನು ಅಭ್ಯರ್ಥಿಗಳ ಗಮನಕ್ಕೂ ತರಲಾಗಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ವಹಿಸುವುದು ಆಯೋಗದ ವ್ಯಾಪ್ತಿಗೆ ಸೇರಿದೆ’ ಎಂದು ರಾಜೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.