ಸಮಾವೇಶದಲ್ಲಿ ಭಾಷಣ ಆರಂಭಿಸಿದಪ್ರಧಾನಿ ಮೋದಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡುಗುಜಿಲ್ಲೆಗಳ ಹೆಸರುಗಳನ್ನು ಮೊದಲಿಗೇ ಪ್ರಸ್ತಾಪಿಸಿದರು. ನಂತರ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ದೇವೇಗೌಡರು ಸೋಲಿಸಿಬಿಟ್ಟಾರು ಎಂಬ ಭಯದಿಂದಲೇ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರಲಿಲ್ಲ,‘ ಎಂದೆಲ್ಲಾ ಅಬ್ಬರಿಸಿದ ಮೋದಿ, ಇನ್ನೇನು ಭಾಷಣ ಮುಗಿಸುವ ಮುನ್ನ ದಿವಂಗತ ಅಂಬರೀಷ್ ಅವರನ್ನು ನೆನಪಿಸಿಕೊಂಡರು. ’ಸುಮಲತಾ ಅವರ ಕೈ ಹಿಡಿಯಿರಿ,’ ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು. ಅದಾದ ತಕ್ಷಣವೇ ಅವರ ಮಾತು ತಿರುಗಿದ್ದು ಚೌಕಿದಾರ್ ಕಡೆಗೆ. ‘ನೀವು ನೀಡುವ ಪ್ರತಿಮತವೂ ತಲುಪುವುದು ಈ ಚೌಕಿದಾರನಿಗೆ,’ ಎಂದು ಅವರು ಹೇಳಿದರು.