ನೆರೆ ಪರಿಹಾರ ನೀಡಿದಿರುವುದಕ್ಕೆ ಆಕ್ರೋಶ: ‘ರಷ್ಯಾಗೆ ₹ 7000 ಕೋಟಿ ನೆರವು ನೀಡಲು ಅವರ ಬಳಿ ಹಣವಿದೆ. ನೆರೆ ಸಂತ್ರಸ್ತರಿಗೆ ಬಿಡಿಗಾಸು ನೀಡುವ ಔದಾರ್ಯವಿಲ್ಲ’ ಎಂದು ಕಿಡಿ ಕಾರಿದ ಕುಮಾರಸ್ವಾಮಿ, ‘ಅಮಿತ್ ಶಾ ಸೇರಿದಂತೆ ಬೆರಳೆಣಿಕೆಯ ಒಂದಿಬ್ಬರನ್ನು ಬಿಟ್ಟು ಬಿಜೆಪಿಯ ಯಾವೊಬ್ಬ ಮುಖಂಡರೂ ಮಾತನಾಡುವ ಧೈರ್ಯ ತೋರುವುದಿಲ್ಲ. ಪಕ್ಷದವರಿಗೇ ಈ ಗತಿ ಇದ್ದು, ಇನ್ನು ನಮ್ಮನ್ನು ಮಾತನಾಡಿಸುತ್ತಾರಾ?’ ಎಂದೂ ಪ್ರಶ್ನಿಸಿದ್ದಾರೆ.