ಕಲ್ಯಾಣಮಂಟಪದಲ್ಲಿ ಸೋಮವಾರ ಮದುವೆ ನೆರವೇರಿದ್ದು, ಈ ವೇಳೆ ಮಂಗನ ಭಯಕ್ಕೆ ಅತಿಥಿಗಳು ಗಂಟೆಗಟ್ಟಲೆ ಬಾಗಿಲು ಹಾಕಿಕೊಂಡೇ ಒಳಗೆ ಇರಬೇಕಾಯಿತು. ಹೀಗಾಗಿ ಅದನ್ನು ಹಿಡಿದು ಬೇರೆಡೆಗೆ ಸಾಗಿಸಲು ಅರಣ್ಯ ಇಲಾಖೆ ಅಧಿಕಾರಿಗಳ ಮೊರೆ ಹೋದರು. ಹಂದಿ ಹಿಡಿಯುವವರೊಂದಿಗೆ ಬೋನು, ಬಲೆಯೊಂದಿಗೆ ಅಧಿಕಾರಿಗಳು ಬಂದು ರಾತ್ರಿಯವರೆಗೆ ಪ್ರಯತ್ನಿಸಿದರೂ ಚಾಲಾಕಿ ಮಂಗ ಅವರ ಕೈಗೆ ಸಿಗಲಿಲ್ಲ.