ತಾಲ್ಲೂಕಿನ ಕುಳವೆಯ ಜಾನಕಿ – ನಾರಾಯಣ ನಾಯ್ಕ ದಂಪತಿಯ ಮೂವರು ಪುತ್ರರಲ್ಲಿ, ಕಿರಿಯ ಮಗ ಧನಂಜಯ ನಾಯ್ಕ, 17 ವರ್ಷಗಳ ಹಿಂದೆ ಸೈನ್ಯ ಸೇರಿದವರು. ದೈಹಿಕ ತರಬೇತಿ ನಿರ್ದೇಶಕರಾಗಿ ಸೇರಿ, ಈಗ ಮೀರಟ್ ನಲ್ಲಿ ಹವಾಲ್ದಾರ್ ಆಗಿದ್ದಾರೆ. ಎರಡನೇ ಮಗ ಶ್ರೀನಿವಾಸ ನಾಯ್ಕ, ಸಿಆರ್ಪಿಎಫ್ನಲ್ಲಿ ಸೈನಿಕರಾಗಿ, ಪ್ರಸ್ತುತ ಹೈದರಾಬಾದ್ನಲ್ಲಿದ್ದಾರೆ.