‘ಸ್ವೀಪ್ ಚಟುವಟಿಕೆಗಳು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹೆಚ್ಚು ನಡೆದಿದ್ದವು. ಬಯಲಾಟ, ಮ್ಯಾರಥಾನ್, ಪಂಜಿನ ಮೆರವಣಿಗೆಯಂಥ ಜಾಗೃತಿ ಕಾರ್ಯಕ್ರಮಗಳು ನಗರ ಪ್ರದೇಶದಲ್ಲಿ ನಿರೀಕ್ಷಿತ ಪರಿಣಾಮ ಬೀರಿಲ್ಲ. ಆದರೆ ಮತದಾನ ಪ್ರಮಾಣ ಶೇ 45–50 ಇದ್ದ ಗ್ರಾಮಗಳಲ್ಲಿ 65 ದಾಟಿರುವುದು ಸಂತಸದ ವಿಚಾರ’ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ’ಪ್ರಜಾವಾಣಿ’ಗೆ ತಿಳಿಸಿದರು.