‘ಇತರೆಡೆ ಅವರನ್ನು ಮತಗಟ್ಟೆಗೆ ಕರೆದುಕೊಂಡು ಬರಲು ವಾಹನ ಸೌಲಭ್ಯ ಮಾಡಲಾಗುತ್ತಿದೆ. ಇದಕ್ಕಾಗಿ ₹12ರಿಂದ ₹20 ಲಕ್ಷ ತನಕ ಖರ್ಚಾಗುತ್ತಿದೆ. ಆದರೆ, ನಮ್ಮಲ್ಲಿ ಫಲಾನುಭವಿ ಅಂಗವಿಕಲರೇ ಮುಂದೆ ಬಂದಿದ್ದು, ಅವರಿಗೆ ಪೆಟ್ರೋಲ್ ಭತ್ಯೆ ನೀಡಲಾಗುವುದು. ಇದರಿಂದ ₹3ರಿಂದ ₹5 ಲಕ್ಷದೊಳಗೆ ಖರ್ಚಾಗಲಿದ್ದು, ಸರ್ಕಾರಕ್ಕೆ ಉಳಿತಾಯವಾಗಲಿದೆ’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ತಿಳಿಸಿದರು.