‘ನಮ್ಮದು ಗಂಡ, ಹೆಂಡತಿ ಜಗಳದಂತೆ. ಇವತ್ತು ಗುದ್ದಾಡುತ್ತೇವೆ. ನಾಳೆ ಒಂದಾಗುತ್ತೇವೆ. ನೀವು ಮಾಧ್ಯಮದವರು ದೊಡ್ಡದು ಮಾಡದಿದ್ದರೆ ಅದೇ ಒಳ್ಳೆಯದು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ‘ಕೋವಿಡ್–19 ಕುರಿತ ಸಭೆಯಲ್ಲಿ ವಿರೂಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತನಾಡಿದ್ದರಿಂದ ಸಚಿವರಿಗೆ ಇರಿಸುಮುರಿಸು ಆಗಿದ್ದು, ಅವರು ಅದನ್ನು ನನ್ನಲ್ಲಿ ಹೇಳಿದರು. ನಾನು ಬುದ್ಧಿವಾದ ಹೇಳಿದೆ. ಅವನಿಗೆ ಆಗಲಿಲ್ಲ. ನಾನು ಗೌರವ ಬಿಟ್ಟು ಮಾತನಾಡಿಲ್ಲ’ ಎಂದು ಸಮರ್ಥಿಸಿಕೊಂಡರು.