ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಬಿಗೆ ಮಹಿಳೆಯರು ಬುದ್ಧಿ ಕಲಿಸಲಿ: ಕಾಂಗ್ರೆಸ್

Last Updated 1 ಡಿಸೆಂಬರ್ 2019, 13:41 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್‌ ಅವರು ಮಹಿಳೆಯರ ಆಡಳಿತ ಸಾಮರ್ಥ್ಯದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ,ಮಹಿಳಾ ಮತದಾರರು ಇವರಿಗೆ ಬುದ್ಧಿ ಕಲಿಸಬೇಕು’ ಎಂದು ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕಿಯರಾದ ರಾಣಿ ಸತೀಶ್‌ ಮತ್ತು ಮೋಟಮ್ಮ ಸಲಹೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರಿಗೆ ಅಗೌರವ ನೀಡುವ ಹೇಳಿಕೆಯನ್ನು ಯಾರೂ ನೀಡಬಾರದು’ ಎಂದರು.

‘ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್‌ರಾಜಕಾರಣ ಮಾಡಿಲ್ಲವೇ? ಅವರು ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿಲ್ಲವೇ‘ ಎಂದು ರಾಣಿ ಸತೀಶ್‌ ಪ್ರಶ್ನಿಸಿದರು.‘ಎಂಟಿಬಿ ನಮ್ಮ ಜೊತೆ ರಾಜಕಾರಣ ಮಾಡಿದವರು. ಬಿಜೆಪಿಗೆ ಹೋಗುತ್ತಿದ್ದಂತೆಇಂತಹ ಹೇಳಿಕೆ ನೀಡುತ್ತಾರೆ. ಅವರು ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ. ನಾವೆಲ್ಲ ಕುಟುಂಬವನ್ನೂ ನಿಭಾಯಿಸಿಕೊಂಡು ರಾಜಕಾರಣ ಮಾಡಿಲ್ಲವೇ’ ಎಂದು ಮೋಟಮ್ಮ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT