ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಮತ್ತು ಶಿವನಾಪುರ ಗ್ರಾಮಗಳಲ್ಲಿ ಹೊಸಕೋಟೆಯ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಅವರು ಭಾನುವಾರ ಸುಮಾರು ಎರಡು ಸಾವಿರ ಸೀರೆ, ಕಂಬಳಿ ಹಂಚಿದರು.
ನಾಗರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಲಾಯಿತು. ಶನಿವಾರ ಈ ಗ್ರಾಮಗಳಲ್ಲಿ ಮನೆ ಮನೆಗೆ ಟೋಕನ್ ಹಂಚಲಾಗಿತ್ತು. ಅದನ್ನು ತಂದ ಮಹಿಳೆಯರಿಗೆ ಸೀರೆ, ಪುರುಷರಿಗೆ ಕಂಬಳಿಯನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮಕ್ಕೆ ಬಂದವರು ಬಿರಿಯಾನಿಯನ್ನೂ ಸವಿದರು.
ಚುನಾವಣೆ ಗಿಮಿಕ್:ಈ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಕಾರಣ ಮತದಾರರ ಬೇಟೆ ಈಗಿನಿಂದಲೇ ಪ್ರಾರಂಭವಾಗಿದ್ದು ಇದು ಚುನಾವಣೆಯ ಗಿಮಿಕ್ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಸಿತು.