‘ಪಿಡಿಒ ಸಿದ್ರಾಮಪ್ಪ ಬರಡೋಲ ಅವರಿಗೆ ಅರಕೇರಾ (ಜೆ) ಗ್ರಾಮದ ಶಾಂತಗೌಡ ಉದ್ಯೋಗ ಖಾತ್ರಿ ಯೋಜನೆಯಡಿ ಗುತ್ತಿಗೆ ಕಾಮಗಾರಿ ನೀಡುವಂತೆ ಕೇಳಿದ್ದರು. ಆದರೆ, ಪಿಡಿಒ ಸ್ಪಂದಿಸಿರಲಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅದೇ ಗ್ರಾಮದ ಮೌನೇಶನಿಗೆ ಪಿಡಿಒ ಏಪ್ರಿಲ್ನಿಂದಲೂ ವೇತನ ನೀಡಿರಲಿಲ್ಲ. ಪಿಡಿಒ ಮೇಲೆ ಸೇಡು ತೀರಿಸಿಕೊಳ್ಳಲು ಇಬ್ಬರೂ ಯೋಜನೆ ರೂಪಿಸಿ ಕೃತ್ಯ ಎಸಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.