‘ಯಡಿಯೂರಪ್ಪ ಅವರು 15 ದಿನಗಳು ಪ್ರವಾಸ ಮಾಡಲಿದ್ದು, ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲಿದ್ದಾರೆ. ಮೈತ್ರಿ ಸರ್ಕಾರದ ಯೋಜನೆಗಳು ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದ್ದು, ಈ ಬಗ್ಗೆಯೂ ವ್ಯಾಪಕ ಜನಾಂದೋಲನ ರೂಪಿಸಲಾಗುತ್ತದೆ. ರಾಜ್ಯದಲ್ಲಿ ಅಭದ್ರ ಸರ್ಕಾರ ಇದೆ ಎಂಬ ಭಾವನೆಯನ್ನು ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಇನ್ನಷ್ಟು ಪ್ರಚಾರ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ‘ಮಿಷನ್–20’ ಗುರಿ ತಲುಪಬಹುದು’ ಎಂದು ಅವರು ಹೇಳಿದರು.