ಭಾನುವಾರ ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರ ಸೂಚನೆಯಂತೆ ಸೋಮವಾರ ಬೆಳಿಗ್ಗೆ ಆರೋಪಿಗಳಾದ ದಿನೇಶ, ಅಶ್ವತ್ಥ, ಸುನೀಲಕುಮಾರ್, ನಾಜೀರ್ ಅಹ್ಮದ್, ಶಾ ನವಾಜ್ ಮತ್ತು ನೂತನ್ ಅವರನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆ ತರಲಾಯಿತು. ಮಧ್ಯಾಹ್ನ 12 ರ ಸುಮಾರಿಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ತೆರದ ನ್ಯಾಯಾಲಯದಲ್ಲೇ ಆರೋಪಿಗಳಿಂದ ವಕಾಲತ್ಗೆ ಸಹಿ ಪಡೆದ ವಕೀಲರು ಅವರ ಪರವಾಗಿ ವಕಾಲತ್ ಸಲ್ಲಿಸಿದರು.