ಚಡಚಣ(ವಿಜಯಪುರ): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಉಮದಿ ಗ್ರಾಮದಲ್ಲಿ ಬುಧವಾರ ಸಿದ್ದಪ್ಪ ಗುರಲಿಂಗಪ್ಪ ಅರಕೇರಿ ಎಂಬಾತ ಆಸ್ತಿಗಾಗಿ ತಂದೆ, ತಾಯಿ ಹಾಗೂ ಅಕ್ಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ, ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ತಂದೆ ಗುರಲಿಂಗಪ್ಪ ಅಣ್ಣಪ್ಪ ಅರಕೇರಿ (82), ತಾಯಿ ನಾಗವ್ವಾ ಗುರಲಿಂಗಪ್ಪ ಅರಕೇರಿ (75) ಹಾಗೂ ಸಹೋದರಿ ಸಮುದ್ರಾಬಾಯಿ ಶಿವಲಿಂಗಪ್ಪ ಬಿರಾದಾರ (62) ಕೊಲೆಯಾದವರು.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಕಲಹವಿತ್ತು. ಇದೇ ವಿಷಯಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಸಿದ್ಧಪ್ಪ ಮೂವರನ್ನೂ ಕೊಲೆ ಮಾಡಿದ್ದಾನೆ ಎಂದು ಉಮದಿ ಠಾಣೆ ಪೊಲೀಸರು ತಿಳಿಸಿದ್ದಾರೆ.