ಬೇಕರಿಯೊಂದರಲ್ಲಿ ಸೈಯದ್ ವಸೀಂ ಕೆಲಸ ಮಾಡುತ್ತಿದ್ದು, ಶಬೀರ್ ಮರದ ಕೆಲಸ ಮಾಡಿಕೊಂಡಿದ್ದ. ಇಬ್ಬರೂ ಪರಿಚಿತರಾಗಿದ್ದು, ಸ್ಥಳೀಯ ನಿವಾಸಿಗಳು. ಗಾಂಜಾ ಖರೀದಿ ಮಾಡಲು ₹ 50 ಕೊಡುವಂತೆ ಮಂಗಳವಾರ ರಾತ್ರಿ ಸೈಯದ್ ವಸೀಂ ಬಳಿ ಶಬೀರ್ ಕೇಳಿದ್ದಾನೆ ಈ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿದ್ದರು ಎನ್ನಲಾಗಿದೆ.