ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ಆರಂಭವಾದ ರಾತ್ರಿಯೇ ಮೈಸೂರಿನಲ್ಲಿ ಭೀಕರ ಕೊಲೆ

Last Updated 5 ಮೇ 2020, 6:11 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಮದ್ಯದಂಗಡಿ ಆರಂಭವಾದ ಮೊದಲ ದಿನವೇ ಮದ್ಯ ಸೇವನೆ ಮಾಡಿದ ಗೆಳೆಯರೇ ಯುವಕರೊಬ್ಬರನ್ನು ಇರಿದು ಕೊಲೆ ಮಾಡಿದ್ದಾರೆ.

ಕ್ಯಾತಮಾರನಹಳ್ಳಿಯ ವಾಲ್ಮೀಕಿ ರಸ್ತೆಯ 15ನೇ ಕ್ರಾಸಿನ ಸತೀಶ್ (22) ಕೊಲೆಯಾದ ಯುವಕ.

ಇವರನ್ನು ಸೋಮವಾರ ರಾತ್ರಿ ಮನೆಯಿಂದ ಕರೆದುಕೊಂಡು ಹೊರ ಬಂದ ಸ್ನೇಹಿತರಾದ ಕಿರಣ್, ಮಧು ಹಾಗೂ ಇತರರು ಮನೆಯಿಂದ ಸುಮಾರು ನೂರು ಮೀಟರ್ ಅಂತರದಲ್ಲೆ ದೊಣ್ಣೆಯಿಂದ ತಲೆಗೆ ಹೊಡೆದು ಹಾಗೂ ಹರಿತವಾದ ಆಯುಧವೊಂದರಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಕೊಲೆ ಮಾಡಿದವರು ಮದ್ಯ ಸೇವಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣ ಉದಯಗಿರಿ ಠಾಣೆಯಲ್ಲಿ ದಾಖಲಾಗಿದೆ‌.
ಎನ್.ಆರ್. ವಿಭಾಗದ ಎಸಿಪಿ ಶಶಿಧರ್ ಹಾಗೂ ಇನ್ ಸ್ಪೆಕ್ಟರ್ ಪೂಣಚ್ಚ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT