ರಥೋತ್ಸವಕ್ಕೆ ತಮಿಳುನಾಡಿನ ಸತ್ಯಮಂಗಲ, ಈರೋಡ್, ಸೇಲಂ, ಮೆಟ್ಟುಪಾಳ್ಯಂ, ಕೊಯಮತ್ತೂರು, ಚಾಮರಾಜ ನಗರ ತಾಲ್ಲೂಕಿನ ಹರದನಹಳ್ಳಿ, ಬಂಡಿಗೆರೆ, ವೆಂಕಟಯ್ಯನ ಛತ್ರ, ಅಂಕನಶೆಟ್ಟಿಪುರ, ಚಿಕ್ಕಹೊಳೆ, ಬಸವಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.