ಹೊಸಪೇಟೆ: ‘ನನ್ನನ್ನು ಅವಿವೇಕಿ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಕಠಿಣ ಪದ ಬಳಕೆಯಿಂದ ಮೂದಲಿಸಿದ್ದಾರೆ. ಆದರೆ, ನನಗೆ ಯಾವುದೇ ಬೇಸರವಿಲ್ಲ. ಶತಮೂರ್ಖ, ಮುಠ್ಠಾಳ ಸೇರಿದಂತೆ ಇತರೆ ಪದಗಳು ನನಗೂ ಬಳಸುವುದು ಗೊತ್ತಿದೆ. ಆದರೆ, ನನ್ನದು ಆ ಸಂಸ್ಕೃತಿಯಲ್ಲ’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬುಧವಾರ ಪ್ರತಿಕ್ರಿಯಿಸಿದ್ದಾರೆ.