‘ಹತ್ತು ದಿನಕ್ಕೆ ಒಮ್ಮೆಯಾದರೂ ಜಲಮಂಡಳಿಯವರು ನೀರು ಪೂರೈಕೆ ಮಾಡುತ್ತಿಲ್ಲ. ಆದರೆ, ನವನಗರದ ಎಪಿಎಂಸಿ ಪೊಲೀಸ್ ಠಾಣೆ ಆವರಣದಲ್ಲಿರುವ ಪಂಪ್ಹೌಸ್ನಿಂದ ಸೋಮವಾರ ಅಪಾರ ಪ್ರಮಾಣದ ನೀರು ಹರಿದು ರಸ್ತೆಗೆ ಬಂದಿತು. ವ್ಯರ್ಥವಾಗಿ ಗಟಾರ ಸೇರಿತು. ಅರ್ಧ ಗಂಟೆಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದರೂ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.