ಶನಿವಾರ ಮೈಸೂರು ನಗರದಲ್ಲಿ ಥಿಯೇಟರ್ಗಳು, ಮಾಲ್ಗಳು ಮುಚ್ಚಿದ್ದರೆ ಅರಮನೆ ಹಾಗೂ ಮೃಗಾಲಯ ತೆರೆದಿದ್ದವು. ವಿದೇಶಿಗರು ಸೇರಿದಂತೆ ಹಲವು ಪ್ರವಾಸಿಗರು ಭೇಟಿ ನೀಡಿದರು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ 22ರವರೆಗೆ ಅರಮನೆ ಮುಚ್ಚಲು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತೀರ್ಮಾನ ಕೈಗೊಂಡರು. ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ, ರಂಗನತಿಟ್ಟು ಪಕ್ಷಿಧಾಮಕ್ಕೆ ಶುಕ್ರವಾರ ಸಂಜೆಯಿಂದಲೇ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.