ತಮ್ಮ ಕೊನೆಯ ಉಸಿರಿನವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದ ಎನ್.ಪಿ.ಭಟ್ ಅವರು, ಅವನಿ ರಸಿಕರ ರಂಗ ಎಂಬ ಸಂಸ್ಥೆ ಸ್ಥಾಪಿಸಿ ದಶಕಕ್ಕೂ ಹೆಚ್ಚು ಕಾಲ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಂಗೀತ ಕಲೆ ಶ್ರೀಮಂತಗೊಳಿಸಲು ಶ್ರಮಿಸಿದರು. ರಂಜನ ಭಟ್ಟ, ನಾರಂಗಿ ಭಟ್ಟ ಎಂಬ ಕಾವ್ಯನಾಮದಿಂದ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ. ದಕ್ಷಿಣ ಧೃವ ನಕ್ಕಾಗ ಎಂಬ ಕಥಾಸಂಕಲನ, ಅಲ್ಲಿಯ ಇಲ್ಲಿಯ ಕಥೆಗಳು, ಹೆಮ್ಮರಗಳು ತಲೆಎತ್ತಿವೆ, ಕುಬೇರ ರಾಜ್ಯದ ಚಿತ್ರ ವಿಚಿತ್ರ ಎಂಬ ಅಮೆರಿಕ ಪ್ರವಾಸ ಕಥನ ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ.