‘ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಕೃಷಿ ಬಜೆಟ್ ಮೂಲಕ ಸಾಲ, ಬಡ್ಡಿ ಮನ್ನಾ ಮಾಡಿದರು. ನಾನಾ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಕಣ್ಣೀರು ಒರೆಸುವವರಾದರು. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹೋದಲ್ಲೆಲ್ಲ ಕಣ್ಣೀರು ಸುರಿಸುವವರಾದರು. ಸಿದ್ದರಾಮಯ್ಯ ಅವರು ಜನರು ಕಣ್ಣೀರು ಹಾಕಿಸುವಂತೆ ಮಾಡಿದ ಮುಖ್ಯಮಂತ್ರಿ’ ಎಂದು ಟೀಕಿಸಿದರು.