ಹೊಸ ಹಾಡಿಗೆ ಪ್ರತಿಕ್ರಿಯಿಸಿರುವ ಕನ್ನಡಿಗರು, ‘ಇದೀಗ ಹಾಡು ಕೇಳಲು ಸೊಗಸಾಗಿದೆ’, 'ಇದು ಕನ್ನಡಿಗರಿಗೆ ಸಂದ ಜಯ’, 'ಕೆಟ್ಟ ಮೇಲೆ ಬುದ್ಧಿ ಬಂತು...ಇರಲಿ ಮುಂದಾದರು ಕನ್ನಡಕ್ಕೆ ಆದ್ಯತೆ ನೀಡಿ’, ಬದಲಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇನ್ನೂ ಕೆಲವರು, ಇದೆಂಥ ಹಾಡು; ಅದೇ ಹಳೆಯದನ್ನು ಕತ್ತರಿಸಿ ಕೂಡಿಸಿರುವುದು ಎಂದೂ ಟೀಕಿಸಿದ್ದಾರೆ.