ಬೆಂಗಳೂರು: ಇಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಲಾಗುವುದು. ಬಳಿಕ, ನಾವು ತಕ್ಷಣ ರಾಜಭವನಕ್ಕೆ ಹೋಗುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಬೆಳಿಗ್ಗೆ ಪಕ್ಷದ ಶಾಸಕಾಂಗ ಸಭೆಗೆ ಬಂದ ಅವರು ಸುದ್ದಿಗಾರರ ಜತೆ ಮಾತನಾಡಿ, ಸಭೆ ಬಳಿಕ ರಜ್ಯಪಾಲರನ್ನು ಭೇಟಿ ಮಾಡಿ ನಾವು ಸರ್ಕಾರವನ್ನು ರಚಿಸಲು ನಮ್ಮ ಹಕ್ಕನ್ನು ಮಂಡಿಸುತ್ತೇವೆ. ಹೆಚ್ಚಿನ ಅಂಶ ನಾಳೆ ವರೆಗೆ ಸಮಯ ನೀಡುವಂತೆ ರಾಜ್ಯಪಾಲರನ್ನು ಕೇಳುತ್ತೇವೆ ಎಂದರು.
ಜತೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಇದ್ದರು.
During the legislature party meeting the leader will be elected. From there we will go to Raj Bhavan immediately. We will claim to form the govt. Most probably we will ask the Governor to give us time tomorrow: BS Yeddyurappa, BJP #KarnatakaElections2018pic.twitter.com/jYywOtFSG9