‘ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಕೃತಕ ಉಸಿರಾಟ ನೀಡಿದ್ದರಿಂದ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆದರೆ ಬಿಜಿಎಸ್ ಆಸ್ಪತ್ರೆಗೆ ಅವರನ್ನು ನೋಡಲು ತಿಮ್ಮಕ್ಕ ಶನಿವಾರ ಬಂದಿದ್ದರು. ‘ನಾನು ತಿಮ್ಮಕ್ಕ ಬಂದಿದೀನಿ’ ಎಂದು ಅವರು ಹೇಳಿದಾಕ್ಷಣ ಕಣ್ಣುಬಿಟ್ಟರು. ತಿಮ್ಮಕ್ಕ ಅವರು ಅತ್ತಾಗ, ಕೈ ನೇವರಿಸಿ ಸಮಾಧಾನ ಮಾಡಿದರು’ ಎಂದು ನರಸಮ್ಮನವರ ಮಗ ಶ್ರೀರಾಮ್ ಭಾವುಕ ಕ್ಷಣವನ್ನು ವಿವರಿಸಿದರು.