ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಜುನೇದ್ ಪೀರ್ ಹಾಗೂ ಪರಿತೋಷ್, ‘ಕೆರೆಗಳಲ್ಲಿ ಹಸಿರು ಪಾಚಿ ಬೆಳೆಯುವುದರಿಂದ ಸೂರ್ಯನ ಬೆಳಕು ನೀರಿನ ಆಳ ಪ್ರವೇಶಿಸುವುದಿಲ್ಲ. ಇದರಿಂದ ನೀರು ವಿಷವಾಗುತ್ತದೆ. ಹಸಿರು ಪಾಚಿಯನ್ನು ತಿನ್ನುವ ಹೈಡ್ರಾ ಎಂಬ ನಿಡೇರಿಯಾ ವರ್ಗದ ಜೀವಿಯನ್ನು ಕೆರೆಗೆ ಬಿಡುವುದರಿಂದ ಅದು ಪಾಚಿಯನ್ನು ತಿನ್ನುತ್ತದೆ. ವಿಷವನ್ನು ಅರಗಿಸುವ ಸಾಮರ್ಥ್ಯವನ್ನು ಆ ಜೀವಿ ಹೊಂದಿದೆ. ಇದನ್ನು ನಾವು ಸಂಶೋಧನೆಯ ಮೂಲಕ ತಿಳಿಸಿದೆವು’ ಎಂದರು.