ಸಭೆಗೂ ಮುನ್ನ, ಮಾಧ್ಯಮದವರನ್ನು ಕಂಡ ಸಚಿವರು ಸಿಡಿಮಿಡಿಗೊಂಡರು. ‘ಸಭೆಯಿಂದ ಹೊರಹೋಗಿ, ನಿಮಗೆ ಕನ್ನಡ ಭಾಷೆ ಅರ್ಥ ಆಗಲ್ವಾ? ನಮಗೆ ಬೇಕಾದಾಗ, ನಾವು ಕರೆದಾಗ ನೀವು ಬಂದರಷ್ಟೇ ಸಾಕು’ ಎಂದು ಹೇಳಿ ಸಭೆಯಿಂದ ಹೊರಹಾಕುವ ಪ್ರಯತ್ನ ಮಾಡಿದರು. ‘ಸಭೆಯ ವಿಡಿಯೊ ಮಾಡಬೇಡಿ' ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮೆರಾಮನ್ಗಳನ್ನೂ ಗದರಿದರು.