ರಾಮನಗರ: ಇಲ್ಲಿನ ಟಿಪ್ಪುನಗರ ಬಳಿ ರಾಜಕಾಲುವೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನೇತೃತ್ವದ ತಂಡವು ಶೋಧ ಕಾರ್ಯ ನಡೆಸಿದ್ದು, ಬಾಂಬ್ನಂತಹ ವಸ್ತುಗಳು ಪತ್ತೆಯಾಗಿವೆ.
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಬಂಧಿತನಾದ ಶಂಕಿತ ಉಗ್ರ ಹಬೀಬುಲ್ಲಾನನ್ನು ಎನ್ಐಎ ಅಧಿಕಾರಿಗಳು ಬೆಳಿಗ್ಗೆ ರಾಮನಗರಕ್ಕೆ ಕರೆ ತಂದು ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಬಾಂಬ್ನಂತಹ ಕಚ್ಚಾ ಸಾಮಗ್ರಿಗಳು ದೊರೆತವು ಎನ್ನಲಾಗಿದೆ.