‘ನಾನಿಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ. ಯಾರೊಬ್ಬರ ಬಗ್ಗೆ ದೂರು ಹೇಳಲು, ಆರೋಪ ಮಾಡಲು ಬಂದಿಲ್ಲ. ಸಂತ್ರಸ್ತರಿಗೆ ಬಟ್ಟೆ, ತಿಂಡಿ– ತಿನಿಸು, ಅಕ್ಕಿ, ಔಷಧಿ ನೀಡಲು ಬಂದಿದ್ದೇನೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂಗೆ ಆಗುತ್ತದೆ. ಎಷ್ಟು ನಷ್ಟವಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಪುನಃ ಜೀವನ ಕಟ್ಟಿಕೊಳ್ಳಲು ಅವರಿಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು’ ಎಂದರು.