ಬಾಲಗಂಗಾಧರನಾಥ ಸ್ವಾಮೀಜಿಯ ಸಂಸ್ಮರಣೋತ್ಸವದ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಪೀತಾಂಬರ, ಕಂಠಿಹಾರ ಮತ್ತು ಕಿರೀಟವನ್ನು ತೊಡಿಸಿ ತುಲಾಭಾರದ ತಕ್ಕಡಿಯಲ್ಲಿ ಕೂರಿಸಲಾಯಿತು. ಮೊದಲಿಗೆ ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಬೆಳ್ಳಿಯ ಗಟ್ಟಿಗಳನ್ನು ತಕ್ಕಡಿಗೆ ಹಾಕಿದರು. ನಂತರ ಶಾಸಕರಾದ ಕೆ.ಎಸ್.ಲಿಂಗೇಶ್, ಎಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಬೆಳ್ಳಿಯನ್ನು ಹಾಕಿದರು.