ಬೆಂಗಳೂರಿನ ಮನೆಯಲ್ಲೇ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ನೆರವೇರಿಸಲು ಕುಮಾರಸ್ವಾಮಿ ನಿಶ್ಚಯಿಸಿದ್ದರು. ಆದರೆ ಸದ್ಯ ರಾಜಧಾನಿಯಲ್ಲಿ ಕೋವಿಡ್-19 ಸೋಂಕಿತರು ಹೆಚ್ಚುತ್ತಿದ್ದು, ರೆಡ್ ಝೋನ್ ಆಗಿ ಗುರುತಿಸಲ್ಪಟ್ಟಿರುವುದರಿಂದ ವಿವಾಹವು ಕೇತಗಾನಹಳ್ಳಿಗೆ ಸ್ಥಳಾಂತರಗೊಂಡಿದೆ. ತೋಟದ ಮನೆಯ ಅಂಗಳದಲ್ಲೇ ಚಪ್ಪರ ಹಾಕಲಾಗಿದೆ. ಶುಕ್ರವಾರ ಬೆಳಗ್ಗೆ 10ಕ್ಕೆ ಧಾರಾ ಮುಹೂರ್ತವಿದ್ದು, ಎರಡೂ ಕುಟುಂಬದಿಂದ ಸುಮಾರು30 ಮಂದಿಯಷ್ಟೇ ಪಾಲ್ಗೊಳ್ಳಲಿದ್ದಾರೆ. ಸಚಿವರು-ಸಂಸದರೂ ಸೇರಿದಂತೆ ಯಾರೊಬ್ಬರಿಗೂ ಆಹ್ವಾನ ನೀಡಿಲ್ಲ.