‘ಮಹದಾಯಿ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಎರಡೂ ಸರ್ಕಾರಗಳು ಸ್ಪಷ್ಟೀಕರಣ ಕೇಳಿದ್ದು, ನಾವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇವೆ. ಅಲ್ಲಿ ತೀರ್ಮಾನ ಆಗುವವರೆಗೆ ಅಧಿಸೂಚನೆ ಹೊರಡಿಸುವುದು ಬಹಳ ಕಷ್ಟ. ಕರ್ನಾಟಕ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಕಾನೂನು ತಜ್ಞರು, ಸರ್ವಪಕ್ಷಗಳ ಸಭೆ ಕರೆಯಲಿ, ಈ ಹಂತದಲ್ಲಿ ಅಧಿಸೂಚನೆ ಆದರೆ ಬಜೆಟ್ನಲ್ಲಿ ನಯಾ ಪೈಸೆ ಇಟ್ಟಿಲ್ಲ ಎಂಬುದನ್ನು ಗಮನಿಸಬೇಕು. ಹೀಗಿದ್ದರೂ, ಅಧಿಸೂಚನೆ ಹೊರಡಿಸಬಹುದು ಎಂದು ರಾಜ್ಯದ ಕಾನೂನು ತಜ್ಞರು ಹೇಳಿದರೆ ಅದನ್ನು ನಾವು ಪರಿಶೀಲಿಸಲು ಸಿದ್ಧ. ಇಲ್ಲವಾದರೆ ಎರಡೂ ಸರ್ಕಾರಗಳು ಸಲ್ಲಿಸಿರುವ ಅರ್ಜಿ, ಸುಪ್ರೀಂ ಕೋರ್ಟ್ನಲ್ಲಿ ವಿಷಯ ಇತ್ಯರ್ಥಗೊಂಡ ಬಳಿಕವಷ್ಟೇ ಅಧಿಸೂಚನೆ ಹೊರಡಿಸಬಹುದಷ್ಟೇ’ ಎಂದರು.