ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ‘ಅಯ್ಯಯ್ಯೋ ಅವರಿಗೆ ಹೇಳಲು ಆಗುತ್ತದೆಯೇ? ಯಾವುದೇ ವ್ಯಕ್ತಿಯ ಕುರಿತು ಆರೋಪ ಬಂದರೆ ದೊಡ್ಡದಾಗಿ ಬಿಂಬಿಸುತ್ತಾರೆ. ಆ ವ್ಯಕ್ತಿ ಸ್ಪಷ್ಟನೆ ನೀಡಿದರೆ ಅದರತ್ತ ತಿರುಗಿಯೂ ನೋಡುವುದಿಲ್ಲ. ಗಲಾಟೆ ಮಾಡಿದರೆ ಇನ್ನೂ ಜಾಸ್ತಿ ಬೆಳೆಸುತ್ತಾರೆ. ಸುಮ್ಮನಿರುವುದೇ ವಾಸಿ’ ಎಂದು ಹೇಳಿದರು.