ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಪ್ಪನಿಂದಲೂ ಸರ್ಕಾರ ಅಲುಗಾಡಿಸಲಾಗದು: ಯತ್ನಾಳ

Last Updated 3 ಡಿಸೆಂಬರ್ 2019, 9:16 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಯಾರಪ್ಪನಿಂದಲೂ ಅಲುಗಾಡಿಸಲು ಆಗುವುದಿಲ್ಲ. ಈ ಸರ್ಕಾರ ತನ್ನ ಅವಧಿ ಪೂರೈಸಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಠುಸ್ ಪಟಾಕಿ ಮಾಡಿದ್ದಾರೆ. 2 ದಿನಗಳಿಂದಲೂ ಅವರ ಬ್ಯಾಟರಿ ಲೋ ಆಗಿದೆ. ಏನೂ ಮಾತನಾಡುತ್ತಿಲ್ಲ. ಈಗ ಕುಮಠಳ್ಳಿ ಫುಲ್ ಛಾರ್ಜ್‌ ಆಗಿದ್ದಾರೆ. ಲಕ್ಷ್ಮಿಯಂತಹ ಆಟಂ ಬಾಂಬೇ ಠುಸ್ ಆಗಿದ್ದು, ಅವರಿಂದಲೇ ಏನೂ ಮಾಡಲು ಆಗಲಿಲ್ಲವೆಂದು ತಿಳಿದ ಡಿ.ಕೆ. ಶಿವಕುಮಾರ್‌ ಹುಬ್ಬಳ್ಳಿಯಿಂದಲೇ ವಾಪಸ್‌ ಆಗಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT