ತುಂಗಾ ನದಿ ತಟದಲ್ಲಿರುವ ಶೃಂಗೇರಿ, ಭದ್ರಾ ನದಿ ದಂಡೆಯಲ್ಲಿರುವ ಹೊರನಾಡು, ಕಳಸ ಪುಣ್ಯಕ್ಷೇತ್ರಗಳಲ್ಲಿ ಅಭಾವವಾಗುವಷ್ಟು ನೀರಿನ ಕೊರತೆ ಇಲ್ಲ. ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕಲ್ಹತ್ತಿ ಗಿರಿಯಲ್ಲಿಯೂ ನೀರು ಕಡಿಮೆಯಾಗಿದೆ. ಕೈಕಾಲು, ಮುಖ ತೊಳೆಯಲು, ಸ್ನಾನ ಮಾಡಲು ಸಾಕಾಗುಷ್ಟು ನೀರು ಹರಿಯುತ್ತಿದೆ.