ಕಣ್ಣೀರಿಟ್ಟ ಮಾಜಿ ಶಾಸಕ: ಇದೇ ಕ್ಷೇತ್ರದಿಂದ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಮುಖಂಡರಾದ ಎಸ್.ಕೆ. ಬುಟಾಳಿ ಹಾಗೂ ಸುರೇಶ ಪಾಟೀಲ ಕೂಡ ನಾಮಪತ್ರ ವಾಪಸ್ ಪಡೆದರು. ಕ್ಷೇತ್ರದ ಉಸ್ತುವಾರಿ, ಶಾಸಕ ಎಂ.ಬಿ. ಪಾಟೀಲ ಮನವೊಲಿಕೆಗೆ ಸ್ಪಂದಿಸಿದ ಅವರು, ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದರು.