‘ಮಧುಸೂದನ ಮಿಸ್ತ್ರಿ ಬಂದಾಗ ಹಾಗೂ ಸೋನಿಯಾ ಗಾಂಧಿ ಭೇಟಿ ವೇಳೆಯೂ ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು ಅನ್ನುವುದನ್ನು ಮಾತ್ರ ಹೇಳಿದ್ದೇನೆ. ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವ ಶಕ್ತಿಯಿದೆ’ ಎಂದರು. ‘ಕೆಲ ಲೆಕ್ಕಾಚಾರಗಳ ಪ್ರಕಾರ ಉತ್ತರಕ್ಕೆಈ ಸ್ಥಾನ ಕೊಡಬೇಕು ಅಂತ ಚರ್ಚೆಯಾದಾಗ ಸಿದ್ದರಾಮಯ್ಯ ನನ್ನ ಹೆಸರು ಪ್ರಸ್ತಾಪ ಮಾಡಿರಬೇಕು. ಉಳಿದವುಗಳೆಲ್ಲ ಮಾಧ್ಯಮಗಳ ಸೃಷ್ಟಿ’ ಎಂದು ಹೇಳಿದರು.