ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ವರ್ಷ ₹ 1.70ಲಕ್ಷ ಕೋಟಿ ಮೌಲ್ಯದ ಕಬ್ಬು ಅರೆಯಲಾಗಿದೆ. ಅದರಲ್ಲಿ ₹ 1.68 ಲಕ್ಷ ಕೋಟಿ ಮೊತ್ತವನ್ನು ಬೆಳೆಗಾರರಿಗೆ ಪಾವತಿಸಲಾಗಿದೆ. ಶೇ 87ರಷ್ಟು ಪಾವತಿಯಾಗಿದೆ. ಉಳಿದ ಮೊತ್ತ ನೀಡುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಅವರು 10ರಿಂದ 12 ದಿನಗಳ ಸಮಯ ಕೇಳಿದ್ದಾರೆ. ಒಂದೊಮ್ಮೆ ಹಣ ನೀಡದಿದ್ದರೆ ಅಪರಾಧ ಪ್ರಕರಣ ದಾಖಲಿಸಲಾಗುತ್ತದೆ ಎಂದರು.