ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ನಮ್ಮ ಸಿಬ್ಬಂದಿ ಪಾಳಿ ಪ್ರಕಾರ ಹಗಲು ರಾತ್ರಿ ಹಂಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಿದ್ದರೂ ಸ್ಮಾರಕಗಳಿಗೆ ಹಾನಿ ಉಂಟಾಗಿದೆ. ಹೀಗಾಗಿ ಕಾರಣ ಕೇಳಿ ಎಲ್ಲ ಸಿಬ್ಬಂದಿಗೂ ನೋಟಿಸ್ ನೀಡಿದ್ದೇನೆ. ಸೋಮವಾರ ಸಭೆ ಕರೆದಿದ್ದು, ಮೌಖಿಕವಾಗಿ ಅವರಿಂದ ಉತ್ತರ ಪಡೆಯುವೆ’ ಎಂದು ತಿಳಿಸಿದರು.