‘ಕೆಲಸ ಕೊಡಿಸುವುದಾಗಿ ಮಧ್ಯವರ್ತಿಯೊಬ್ಬ ಐದು ತಿಂಗಳ ಹಿಂದೆ ನಮ್ಮನ್ನು ಒಡಿಶಾದಿಂದ ಕರೆತಂದ. ಗುಬ್ಬಿ ರೈಲು ನಿಲ್ದಾಣದಲ್ಲಿ ಕುಟುಂಬಗಳಿಗೆ ತಲಾ ₹ 10 ಸಾವಿರ ನೀಡಿದ. ನಮ್ಮನ್ನು ಇಟ್ಟಿಗೆ ಕಾರ್ಖಾನೆ ಕೆಲಸಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸಂಬಳ
ನೀಡಲಿಲ್ಲ. ಸಂಬಳ ಕೇಳಿದಾಗ ಮಾರಾಟ ಮಾಡಿದವನನ್ನು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಜೀತ ಮಾಡಿಕೊಂಡಿರಿ ಎಂದರು’ ಎಂದು ಒಡಿಯಾ ಭಾಷೆಯಲ್ಲಿ ಕಾರ್ಮಿಕರು ಅಳಲು ತೋಡಿಕೊಂಡರು.