ಈ ಹಿಂದೆ 18 ದಿನ ನಡೆದ ಹೋರಾಟ ಸಂದರ್ಭದಲ್ಲಿ, ‘ನಿಮ್ಮ ಬೇಡಿಕೆಗೆ ವೇತನ ಆಯೋಗದ ಶಿಫಾರಸಿನಲ್ಲಿ ನ್ಯಾಯ ಸಿಗಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಸರ್ಕಾರ ಮಾತು ತಪ್ಪಿದ್ದು, ಅನಿವಾರ್ಯವಾಗಿ ಪ್ರತಿಭಟನೆ ನಡೆಸುವ ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಶ್ರೀಕಂಠೇಗೌಡ ತಿಳಿಸಿದರು.