‘ಫೆ.28ರಂದು ನಡೆದ ನ್ಯಾಮತಿ ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಡಿ.ಜಿ. ಶಾಂತನ
ಗೌಡ ಅವರು ಸರ್ಕಾರದಿಂದ ಮಂಜೂರಾದ ಪರಿಹಾರದ ಚೆಕ್ ಸಂತ್ರಸ್ತರ ಕುಟುಂಬಕ್ಕೆ ವಿತರಿಸಿದ್ದರು. ಆದರೆ, ರೇಣುಕಾಚಾರ್ಯ ಅವರು ಮಾ.1ರಂದು ಆ ಚೆಕ್ ಅನ್ನು ಮಲ್ಲೇಶಪ್ಪರ ಪತ್ನಿ ಮಲ್ಲಮ್ಮ ಅವರಿಂದ ಪಡೆದು ಪುನಃ ವಿತರಿಸಿ ಫೋಟೊ ತೆಗೆಸಿಕೊಂಡು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ. ತಾವು ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ ಹಣ ಮಂಜೂರು ಮಾಡಿಸಿರುವುದಾಗಿ ಬರೆದುಕೊಂಡಿದ್ದಾರೆ. ಇಂಥ ರಾಜಕಾರಣ ಮಾಡುವವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಶಾಂತನಗೌಡರ ಪುತ್ರ ಪ್ರದೀಪಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.