‘ಪರಮಾಣು ವಿದ್ಯುತ್ ದುಬಾರಿ, ಅಪಾಯಕಾರಿ, ಮುಂದಿನ ಪೀಳಿಗೆಗೆ ಹೆಮ್ಮಾರಿಯಾಗಿದೆ. ಕೈಗಾದ ಅಪಾಯಕಾರಿ ಅಣುತ್ಯಾಜ್ಯ ಉಡಿಯಲ್ಲಿ ಇಟ್ಟುಕೊಂಡ ಕೆಂಡದಂತೆ. ಅಣು ವಿದ್ಯುತ್ ಘಟಕ ವಿಸ್ತರಣೆ ಕೈಬಿಟ್ಟು ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಬೇಕು. ಪಶ್ಚಿಮ ಘಟ್ಟದಲ್ಲಿ ಬೃಹತ್ ಅರಣ್ಯ ನಾಶದ ಯೋಜನೆ ಕೈಗೆತ್ತಿಕೊಳ್ಳಬಾರದು. ನದಿ ಮಾಲಿನ್ಯ ತಡೆಗಟ್ಟಲು, ನದಿ ಕಣಿವೆ ಸಂರಕ್ಷಿಸಲು ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಯೋಜನೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿ, ಸಭೆ ನಿರ್ಣಯ ಸ್ವೀಕರಿಸಿದೆ.