ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಗ್ರಾಮದಲ್ಲಿ ಶನಿವಾರ ಯಮನೂರ್ ಉರುಸ್ ಪ್ರಸಾದ ಸೇವಿಸಿದ ಗ್ರಾಮದ 500ಕ್ಕೂ ಅಧಿಕ ಗ್ರಾಮಸ್ಥರು ವಾಂತಿ ಬೇಧಿಯಿಂದಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಲ್ಲಿ 150ಕ್ಕೂ ಮಕ್ಕಳಿದ್ದಾರೆ.ಆಸ್ಪತ್ರೆಯಲ್ಲಿ ಅಸ್ವಸ್ಥರು ಗಾಬರಿಗೊಂಡಿದ್ದರು.
ದೇವರ ಪ್ರಸಾದ ಸಿಹಿ ಮಾದಲಿ, ಅನ್ನ ಸಾಂಬರ್ ಸೇವಿಸಿದ ಕೂಡಲೇ ವಾಂತಿ ಬೇಧಿ ಆರಂಭಗೊಂಡಿದೆ. ಅಸ್ವಸ್ಥರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.