‘ಈ ಕುರಿತು ಸಾಕಷ್ಟು ಬಾರಿ ಪರಿಷತ್ತಿಗೆ ಪತ್ರ ಬರೆಯಲಾಗಿದೆ. ಅವರದೇ ಆದ ದೊಡ್ಡ ಸುಸಜ್ಜಿತ ಕಟ್ಟಡ ವಿಜಯನಗರದಲ್ಲಿದೆ. ಕನಿಷ್ಠ 6 ತಿಂಗಳು ಖಾಲಿ ಮಾಡಿಕೊಟ್ಟರೆ ಕಟ್ಟಡವನ್ನು ದುರಸ್ತಿಗೊಳಿಸಿ ವಾಪಸ್ ಅವರಿಗೇ ನೀಡಲಾಗುವುದು. ಆದರೆ, ಕಸಾಪ ಪ್ರತಿನಿಧಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಪಕ್ಕದಲ್ಲೇ ಇರುವ ಮತ್ತೊಂದು ಮನೆಯೂ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಹಲವು ವರ್ಷಗಳಿಂದ ವಾಸವಿರುವ ಕುಟುಂಬದವರು ತೆರವು ಮಾಡಲು ಒಪ್ಪುತ್ತಿಲ್ಲ’ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.