ದಲಿತರು ಇರುವುದೇ ಮೇಲ್ಜಾತಿಯವರ ಮನೆಯ ಮುಸುರೆ ತಿಕ್ಕಲಿಕ್ಕೆ, ಅವರ ಬಟ್ಟೆ ತೊಳೆಯಲಿಕ್ಕೆ ಎಂಬ ಭಾವನೆ ಇನ್ನೂ ಹೋಗಿಲ್ಲ ಎಂಬುದಕ್ಕೆ ಈ ನಿದರ್ಶನ ಸಾಕ್ಷಿ. ಇಂತಹ ಕೆಲಸಗಳಿಗೆ ದಲಿತರನ್ನು ಹುರಿದುಂಬಿಸುತ್ತಾರೆ, ಹುಳಿಮಜ್ಜಿಗೆ ಕೊಟ್ಟು ಗೌರವಿಸುತ್ತಾರೆ. ಅಲ್ಲದೇ, ಅಡ್ಡದಾರಿ ಹಿಡಿಯಲು ಏನು ಬೇಕೋ ಅದನ್ನೆಲ್ಲಾ ಒದಗಿಸುತ್ತಾರೆ. ಒಟ್ಟಿನಲ್ಲಿ ಅವರ ಮನೆಯ ಚಾಕರಿಗೆ ಮಾತ್ರ ಇವರು ಮೀಸಲಿರಬೇಕು ಎಂಬುದು ಅವರ ಇಂಗಿತ.