ವಿಧಾನಪರಿಷತ್ತಿನಲ್ಲಿ ಈ ಮಾಹಿತಿ ಗೊತ್ತಾಗುತ್ತಿದ್ದಂತೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹೌಹಾರಿದರು. ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಈ ವಿಷಯವನ್ನು ಸಚಿವರ ಗಮನಕ್ಕೆ ತಂದಾಗ ಇತರ ಸದಸ್ಯರೂ ಬೆರಗಾದರು. ತಕ್ಷಣವೇ ತಲೆ ಮೇಲೆ ಕೈ ಇಟ್ಟ ಸಚಿವರು, ‘ಎಸ್ಎಸ್ಎಲ್ಸಿ, ಪಿಯುಸಿ ಆದವರು ಏನು ಆಡಿಟ್ ಮಾಡುತ್ತಾರೆ. ಕನಿಷ್ಟ ಲೆಕ್ಕಪತ್ರ ನೋಡುವ ಜ್ಞಾನ ಇರಬೇಕಲ್ಲ. ಇಂತಹವರು ಏನು ಲೆಕ್ಕ ನೋಡುತ್ತಾರೆ’ ಎಂದು ಪ್ರಶ್ನಿಸಿದರು.